ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಧೂತಗೀತೆ

ವಿಕಿಸೋರ್ಸ್ದಿಂದ

ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ 1430ರಲ್ಲಿ ಮಠಾಧಿಪತಿಯಾಗಿದ್ದ ಸಪ್ತಕಾವ್ಯದ ಗುರುಬಸವ ಎಂಬ ಕವಿಯ ಕೃತಿ. ಇದರಲ್ಲಿ ವೈರಾಗ್ಯಬೋಧಕವಾದ 101 ಚೌಪದಿಗಳಿವೆ. ಆದಿಯಲ್ಲಿ ಬಸವೇಶ್ವರನ ಸ್ತೋತ್ರವಿದೆ. ಕೊನೆಯಲ್ಲಿ ಅವಧೂತ ಲಕ್ಷಣಗಳನ್ನು ಹೇಳಲಾಗಿದೆ.