User:Anupama Anand

From Wikisource
Jump to navigation Jump to search

ನನ್ನ ಹೆಸರು ಅನುಪಮ ಆನಂದ್. ನಾನು ಕ್ರೈಯ್ಸ್ಟ್ ಯುನಿವರ್ಸಿಟಿಯಲ್ಲಿ ಬಿ.ಎ ಮಡುತ್ತಾ ಇದ್ದಿನೀ. ನಾನು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಓದಲು ಬಂದಿದ್ದೇನೆ. ನಾನು ಸಾಯಿ ಏನ್ಜಲ್ಸ್ ಶಾಲೆಯಲ್ಲಿ ನನ್ನ ಶಿಕ್ಷಣ ಮುಗಿಸಿ ಅಲ್ಲಿಯೆ ಪಿ.ಯು.ಸಿ ಮುಗಿಸಿ ಇವಾಗ ಬೆಂಗಳೂರಿಗೆ ಬಂದಿದ್ದೇನೆ. ಶಾಲೆಯಲ್ಲಿ ಹಲವಾರು ಚರ್ಚಾ ಸ್ಪರ್ಧೆಗಳಲ್ಲಿ, ನೃತ್ಯ, ಹಾಡು ಮತ್ತು ಬರೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಅದಕ್ಕೆ ಹಲವಾರು ಬಹುಮಾನವನ್ನು ಗೆದ್ದಿದೇನೆ. ನಾನು ಗಿಟಾರ್ ಕಲಿಯುತಿದ್ದೆ. ಆದರೆ ಅದು ಬಿಟ್ಟು ಹೊಯಿತು. ಇವಾಗ ನಾನು ಭರತನಾಟ್ಯ ಬಿಟ್ಟು ಕಥಕ್ ಕಲಿಯಲು ಶುರುಮಾಡಿದ್ದೇನೆ. ಕನ್ನಡ ಕಬ್ಬಿಣದ ಕಡಲೆಯೆಂದು ಅನ್ನಿಸುತಿತ್ತು. ಆದರೆ ಈಗ ಕನ್ನಡ ಸುಲಭಯೆಂದೆನಿಸುತದೆ. ನಾನು ಸ್ಪೆಲ್ಲಿಂಗ್ ಬೀನಲ್ಲಿ ರಾಜ್ಯ ಮಟ್ಟದಲಿ ಭಾಗವಹಿಸಿದ್ದೇನೆ. ಶಾಲೆಯಲ್ಲಿ ನನಗೆ ಗಣಿತ ಬಹಳ ಇಷ್ಟ ಆಗುತ್ತಿತು. ಆದರಿಂದ ಪಿ.ಯು.ಸಿನಲ್ಲಿ ವಿಗ್ನಾನದ ದಾರಿಯಲ್ಲಿ ಹೋಗಿ, ನನಗೆ ಇದು ಇಶ್ಟವಿಲ್ಲವೆಂದು ತಿಳಿದು ಈಗ ಬಿ.ಎ ಮಾಡುತ್ತ ಇರುವೆ. ನಾನು ಅದು ಬಿಟ್ಟು ಸಾಹಿತ್ಯ ಮತ್ತು ನಾಟಕಗಳನ್ನು ಓದಲು ಶುರುಮಾಡಿದೆ. ಹಲವಾರು ಕವಿಗಳು ಮತ್ತು ಬರಹಗಾರರ ಸಾಹಿತ್ಯವನ್ನು ಓದಿ, ಅದರಿಂದ ಸಾಕಷ್ಟು ಕಲಿತಿದ್ದೇನೆ. ನಾನು ಶಾಲೆಯಲ್ಲಿ ಸ್ಕೋಲ್ ಕಾಪ್ಟನ್ ಆಗಿದ್ದೆ. ಆಗ ನಾನು ಒಬ್ಬ ನಾಯಕಿಯಾಗಿ ಹೇಗೆ ಇರಬೇಕೆಂದು ಕಲಿತೆ. ಅಲ್ಲಿಯವರೆಗೆ ನಾನು ಜಾಸ್ತಿ ಮತಾಡುತಿರಲಿಲ್ಲ, ಧ್ಯರ್ಯವಿರಲ್ಲಿಲ. ಆದರೆ ಈಗ ಅದೆಲ್ಲ ಬದಲಾಗಿದೆ. ಮುಂದೆ ಕ್ರಿಮಿನೋಲಜಿ ಓದುವುದು ನನ್ನ ಆಸೆಯಗಿದೆ. ನನ್ನ ಪೋಷಕರು ಚಿಕ್ಕಮಗಳೂರಿನಲ್ಲೆ ನೆಲೆಸಿದ್ದು, ನಾನು ಬೆಂಗಳೂರಿಗೆ ನನ್ನ ಜೀವನ ರೂಪಿಸಿಕೊಳ್ಳಲು ಬಂದಿರುವೆ. ಚಿಕ್ಕಮಗಳೂರಿನಲ್ಲಿ ನನ್ನ ಹದಿನಾರು ವರುಶದ ತಮ್ಮನಿದ್ದಾನೆ. ಈಗ ಅವನು ಹತ್ತನೆ ತರಗತಿಯಲ್ಲಿ ಓದುತ್ತಾ ಇರುವನು. ನನ್ನ ಬಳಿ ಒಂದು ಮುದ್ದಾದ ನಾಯಿಯು ಇತ್ತು. ಅದರ ಹೆಸರು ರೋನಿಯೆಂದು. ನನ್ನ ಸುಖ-ದುಖಃಗಳಲ್ಲಿ ಭಾಗಿಯಾದ ಆಪ್ತಮಿತ್ರ. ಆದರೆ ಹೋದ ವರುಶ ಆತ ವಿಧಿವಶನಾದ. ನನಗೆ ಬಹಳ ದುಖಃವಾಯಿತು ಆದರೆ ಈಗ ದುಖಃ ಹೋಗಿ ಅವನು ಇಲ್ಲಯೆಂಬುದನ್ನು ಅರ್ಥ ಮಡಿಕೊಂಡಿದ್ದೇನೆ. ನನಗೆ ತುಂಬ ಇಷ್ಟವಾದ ನೆನೆಪುಗಳು ಕಾಫಿ ಎಸ್ಟೆಟ್ ಅಲ್ಲಿ ನನ್ನ ಕುಟುಂಬದ ಜೊತೆ ಇದ್ದಿದ್ದು. ಬೇಲೂರಿನ ಚನ್ನಕೇಶವ ದೇವಸ್ಥಾನಕ್ಕೆ ಸಾವಿರಾರು ಬಾರಿ ಹೋಗಿ ಆಟ ಆದುತ್ತಾ ದೇವರಿಗೆ ಪ್ರಾರ್ಥಿಸಿ, ಅಲ್ಲಿರುವ ಕೆತ್ತನೆಯನ್ನು ನೋಡಿ ಆಷ್ಚರ್ಯ ಪಟ್ಟು ಮನೆಗೆ ಬರುವುದು ರೊಢಿಯಾಗಿತ್ತು. ಗಿಡ, ಮರ, ಕಾಡು, ಬೆಟ್ಟ, ಗುಡ್ಡ, ಪ್ರಾಣಿ ಪಕ್ಷಿಗಳ ಜೊತೆ ಬೆಳದಿದ್ದೇನೆ. ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲಿ ನೂಡಿದರೂ ಗಾಡಿ, ದೊಡ್ಡ ದೊಡ್ಡ ಮನೆಗಳು, ಅಪಾರ್ಟಮೆಂಟ್. ಗಿಡ, ಮರ, ಪ್ರಾಣಿ ಪಕ್ಷಿಗಳನ್ನು ಕಾಣುವುದೇ ಅಪರೂಪ. ನಾನು ಚಿಕ್ಕಮಗಳೂರಿನ ಆ ಶಾಂತಿ, ಸ್ವಛ್ಚ ಗಾಳಿ, ಅಲ್ಲಿಯ ಜನರನ್ನು ನೆನಪಿಸಿಕೊಳ್ಳುತ್ತೇನೆ. ಚಿಕ್ಕಮಗಳೂರಿನಂತ ಸಣ್ಣ ಊರಿನಲ್ಲಿ ಇದ್ದು ನಾನು ಜೀವನದ ಚಿಕ್ಕ ಚಿಕ್ಕ ಖುಷಿಗಳನ್ನು ತಿಳಿದು ಅದರಲ್ಲಿ ಮುಳುಗಿ ಜೀವನವನ್ನು ತುಂಬ ಸಂತೋಷದಿಂದ ನಡೆಸುವುದು ಹೇಗೆಯೆಂದು ನನಗೆ ತಿಳಿಯಿತು. ಚಿಕ್ಕಮಗಳೂರು ಒಂದು ಚಿಕ್ಕ ಜಾಗ, ಅಲ್ಲಿರುವ ಎಲ್ಲಾ ಜನರು ಒಬ್ಬರನ್ನೋಬ್ಬರು ಗುರುತಿಸುತ್ತರೆ. ಅಲ್ಲರೂ ಬೇರೆಯವರಿಗೆ ಸಹಾಯ ಮಡ್ಡುತ ಒಂದು ಡೊಡ್ಡ ಕುಟುಂಬದಂತೆ ಇದ್ದಾರೆ. ಅದರಿಂದ ನಾನುಕೂಡ ಇವಾಗ ಎಲ್ಲರಿಗೂ ಎಶ್ಟಾಗುತ್ತೊ ಅಶ್ಟು ಸಹಯ ಮಾಡಲು ಪ್ರಯತ್ನಿಸುತ್ತೇನೆ. ಈಗೀಗ ನಾನು ಕವನ, ಚಿಕ್ಕ ಕಥೆಗಳು ಬರಿಯುವುದನ್ನು ಶುರುಮಡಿದ್ದೇನೆ. ಹೀಗೆ ಬರಿಯುವುದಿಂದ ನಾನು ಬೇರೆ ಬರಹಕಾರರು ಬರೆಯುವುದನ್ನು ಇನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಇನ್ನು ನಾನು ತುಂಬ ಚನ್ನಾಗಿ ಬರಿಯುವುದು ಬರದಿದ್ದರೂ, ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ಜೀವನದಲ್ಲಿ ಯಾವಾಗಲೂ ಕಲಿಯುತ್ತ ಇರಬೇಕು. ಅದನ್ನು ತುಂಬ ನೆನಪುಗಳಿಂದ, ನಗುಗಳಿಂದ, ತುಂಬಿಸಬೇಕು ಎಂಬುದು ನನ್ನ ನಂಬಿಕೆ. ಯಾವಾಗಲು ಕಲಿಯುತ್ತ, ನೆನಪುಗಳ್ಳನ್ನು ಮಾಡಿಕೊಳ್ಳುತ್ತಾ ಬದುಕಬೇಕು. ಜೀವನದಲ್ಲಿ ನಮ್ಮ ಮತ್ತು ನಮ್ಮ ಬಂಧುಗಳ ಸಂತೋಷವೇ ಎಲ್ಲಾದಿಕಿಂತ ಮುಖ್ಯ. ನಮ್ಮ ಜೀವನವನ್ನು ನಾವು ಗುರಿ ಕಂಡಂತೆ ಮಾಡಿಕೊಳ್ಳುವುದಕ್ಕೆ ಏನೇ ಕಷ್ಟ ಬಂದರೂ ಅದನ್ನು ಗೆದ್ದು ಗುರಿ ಮುಟ್ಟಬೇಕು ಎಂಬುದು ನನ್ನ ಮಂತ್ರ.